ನನ್ನ ಬಾಲ್ಯದಲ್ಲಿ ನಮ್ಮೂರಿನಲ್ಲಿ ವಾಸುದೇವಪ್ಪನವರ ಕುಟುಂಬವಿತ್ತು. ಇವರು ನಮ್ಮ ದಾಯಾದಿ ಬಂಧುಗಳು. ನಮ್ಮ ಮನೆಯಲ್ಲಿ ನಡೆಯುತ್ತಿದ್ದ ನನ್ನ ಅಜ್ಜ ಅಜ್ಜಿಯರ ವಾರ್ಷಿಕ ಪುಣ್ಯತಿಥಿಗೆ ಅವರು ಊಟಕ್ಕೆ ಬರುತ್ತಿದ್ದರು. ಅವರ ಮನೆಗೆ ನಾವೂ ಹೋಗುತ್ತಿದ್ದೆವು. ಮತ್ತೊಬ್ಬರ ಮನೆಗೆ ಊಟಕ್ಕೆ ಹೋಗುವಾಗ ಕುಡಿಯುವ ನೀರಿನ ಲೋಟಗಳನ್ನು ಅವರವರೇ ತೆಗೆದುಕೊಂಡು ಹೋಗುತ್ತಿದ್ದೆವು. ಊಟದ ನಂತರ ನಮ್ಮ ಲೋಟಗಳನ್ನು ಹಿಂದಕ್ಕೆ ತರುತ್ತಿದ್ದೆವು. ವಾಸಪ್ಪನವರ ಸಹೋದರ ಗೋವಿಂದರಾವ್ ಎನ್ನುವವರು ಇದ್ದಾರೆ ಎಂದು ಹೇಳುತ್ತಿದ್ದರು ಅವರನ್ನು ನಾನು ನೋಡಿರಲಿಲ್ಲ. ಹಲವಾರು ದಶಕಗಳ ನಂತರ, ಈಗ ಒಂದೆರಡು ವರ್ಷಗಳ ಹಿಂದೆ ಫೇಸ ಬುಕ್ ಮೂಲಕ ಪರಿಚಿತರಾದ ಪ್ರಭಾಕರರಾವ್ ಅವರು ಗೋವಿಂದರಾವ್ ಅವರ ಮಗ ಎಂದು ತಿಳಿದು ರೋಮಾಂಚಿತಗೊಂಡೆ. ಅವರನ್ನು ಗಮನಿಸುತ್ತಾ ಬಂದೆ. ಹೃದಯವಂತರು. ಕವಿ ಮನಸ್ಸಿನ ಸಹೃದಯರು ಎಂಬುದನ್ನು ಅರಿತುಕೊಂಡೆ. ಪರಸ್ಪರ ಭೇಟಿಯೂ ಆಗದಿರುವ ನನ್ನ ಬಗ್ಗೆ ಅವರಿಗೆ ಅಪಾರ ಪ್ರೀತಿ. ನಾಲ್ಕೈದು ತಲೆಮಾರಿನ ಹಿಂದೆ ಒಂದೇ ಕುಟುಂಬದಿಂದ ಬಂದವರು ನಾವು. ನನ್ನ ಬಗ್ಗೆ ಕವನವೊಂದನ್ನು ಬರೆದು ತಮ್ಮ ಫೇಸ್ ಬುಕ್ ಗೋಡೆಯ ಮೇಲೆ ಹಾಕಿದ್ದಾರೆ. ಕವನದಲ್ಲಿ ನನ್ನ ಬಗ್ಗೆ ಬರೆದಿದ್ದಾರೆಂಬುದೇ ಮುಖ್ಯವಲ್ಲ. ಪ್ರತಿ ಸಾಲಿನ ಎರಡನೆಯ ಅಕ್ಷರವನ್ನು ಸೇರಿಸಿದರೆ ಅಬ್ಬಣಿ ನಾರಾಯಣರಾವು ಪ್ರಹ್ಲಾದರಾಯ ಎಂದು ಮೂಡಿ ಬರುತ್ತದೆ. ಪ್ರಭಾಕರರಾಯರೇ ನಿಮಗೆ ನಾನು ಕೃತಜ್ಞ, ಕೋಟಿ ನಮನ
ಅಭಿನಂದನೆ-ಅನಾಪ್ರ
************
ಹೂ ಅರಳಿ ಸೂಸಿದೆ ಸುಗಂಧ
ಹಬ್ಬ ಹುಣ್ಣಿಮೆ ಸೊಗಸು ಬರಹ
ಗಣಿ ಯಿಂದಪುಟಿದ ಪದಬಂಧ
ಬಾನಾಡಿಯಂತೆ ನಾಡೆಲ್ಲಾ ವಾರ್ತೆ
ಧಾರಾವಾಹಿ ವರನಟನ ಚರಿತೆ
ಪಯಣ ಸಾಗಿದೆ ದೂರ ಗಗನವೇ ಮೇರೆ
ಕಣಕಣದಲ್ಲೂ ಕನ್ನಡದ ಒಲುಮೆ
ಸಾರಾಮೃತ ರಸಸಿಂಧುಚಿಂತನೆ
ನೋವುನಲಿವುಗಳ ಹೂಗೊಂಚಲು
ಸುಪ್ರಸಿದ್ಧ ರ ಜೀವನಗಾಥೆ
ಆಹ್ಲಾದನೋಟ ಕೋಲಾರ ಸೆಲೆ
ಹೃದಯ ಪೂರ್ವ ಕ ಅಭಿಮಾನ
ಕರಾರ್ಚಿತೆ ಶ್ರೀ ಶಾರದೆಯಪುತ್ರರೇ
ದಯಮಾಡಿ ಸ್ವೀಕರಿಸಿ ಶುಭವಂದನೆ,
#ಪ್ರಭಾಕರ ತಾರಾತನಯ
3/11/2019
https://m.facebook.com/story.php?story_fbid=530342767748980&id=100023197837209&sfnsn=scwspwa&funlid=Rh5eBozFsQYwP7Rg
************
ಹೂ ಅರಳಿ ಸೂಸಿದೆ ಸುಗಂಧ
ಹಬ್ಬ ಹುಣ್ಣಿಮೆ ಸೊಗಸು ಬರಹ
ಗಣಿ ಯಿಂದಪುಟಿದ ಪದಬಂಧ
ಬಾನಾಡಿಯಂತೆ ನಾಡೆಲ್ಲಾ ವಾರ್ತೆ
ಧಾರಾವಾಹಿ ವರನಟನ ಚರಿತೆ
ಪಯಣ ಸಾಗಿದೆ ದೂರ ಗಗನವೇ ಮೇರೆ
ಕಣಕಣದಲ್ಲೂ ಕನ್ನಡದ ಒಲುಮೆ
ಸಾರಾಮೃತ ರಸಸಿಂಧುಚಿಂತನೆ
ನೋವುನಲಿವುಗಳ ಹೂಗೊಂಚಲು
ಸುಪ್ರಸಿದ್ಧ ರ ಜೀವನಗಾಥೆ
ಆಹ್ಲಾದನೋಟ ಕೋಲಾರ ಸೆಲೆ
ಹೃದಯ ಪೂರ್ವ ಕ ಅಭಿಮಾನ
ಕರಾರ್ಚಿತೆ ಶ್ರೀ ಶಾರದೆಯಪುತ್ರರೇ
ದಯಮಾಡಿ ಸ್ವೀಕರಿಸಿ ಶುಭವಂದನೆ,
#ಪ್ರಭಾಕರ ತಾರಾತನಯ
3/11/2019
https://m.facebook.com/story.php?story_fbid=530342767748980&id=100023197837209&sfnsn=scwspwa&funlid=Rh5eBozFsQYwP7Rg
No comments:
Post a Comment